-->

MANGALORE- ಮೇಯರ್ , ಉಪಮೇಯರ್ ಆಯ್ಕೆ ಬಳಿಕ ಮಾಧ್ಯಮಕ್ಕೆ ಹೇಳಿದ್ದು ಹೀಗೆ...( video)

MANGALORE- ಮೇಯರ್ , ಉಪಮೇಯರ್ ಆಯ್ಕೆ ಬಳಿಕ ಮಾಧ್ಯಮಕ್ಕೆ ಹೇಳಿದ್ದು ಹೀಗೆ...( video)

 







ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ( Mangalore city corporation ) ಇಂದು ನಡೆದ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯಿಂದ‌ ಸ್ಪರ್ಧಿಸಿದ್ದ ಜಯನಂದ ಅಂಚನ್‌ (Jayananda Anchan) ಮತ್ತು ಪೂರ್ಣಿಮಾ (Poornima) ಬಹುಮತಗಳಿಂದ ಆಯ್ಕೆಯಾದರು.

ಕದ್ರಿ ಪದವು ವಾರ್ಡ್ ನ ಜಯನಂದ ಶೆಟ್ಟಿ ಮೇಯರ್ ( mayor) ಆಗಿ, ಸೆಂಟ್ರಲ್ ಮಾರ್ಕೆಟ್ ವಾರ್ಡ್ ನ ಪೂರ್ಣಿಮಾ ಅವರು ಉಪಮೇಯರ್ ( Deputy mayor) ಆಗಿ ಆಯ್ಕೆಯಾದರು. 

ಇಂದು ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜಯನಂದ ಅಂಚನ್ ಕಾಂಗ್ರೆಸ್ ‌ನಿಂದ ಶಶಿಧರ್ ಹೆಗ್ಡೆ, ಉಪಮೇಯರ್ ಸ್ಥಾನಕ್ಕೆ   ಬಿಜೆಪಿಯಿಂದ ಪೂರ್ಣಿಮಾ , ಕಾಂಗ್ರೆಸ್ ನಿಂದ ಝೀನತ್ ಸಂಶುದ್ದೀನ್ ಸ್ಪರ್ಧಿಸಿದ್ದರು. 

ಚುನಾವಣೆಯಲ್ಲಿ ಮೇಯರ್ ಮತ್ತು ಉಪಮೇಯರ್  ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ 46 ಮತಗಳು , ಕಾಂಗ್ರೆಸ್ ಅಭ್ಯರ್ಥಿಗಳಿಗೆ 14 ಮತಗಳು ಲಭಿಸಿದವು. ಎಸ್ ಡಿಪಿಐ ನ ಇಬ್ಬರು ಸದಸ್ಯರು ಚುನಾವಣೆಯಲ್ಲಿ ತಟಸ್ಥರಾಗಿದ್ದರು.  ಬಿಜೆಪಿ ಇಬ್ಬರು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ 60 ಸ್ಥಾನಗಳಿದ್ದು, ಬಿಜೆಪಿಯ 44 ಸದಸ್ಯರು, ಕಾಂಗ್ರೆಸ್ ನ 14 ಸದಸ್ಯರು , ಎಸ್ ಡಿ ಪಿ ಐ ನ ಇಬ್ಬರು ಸದಸ್ಯರಿದ್ದಾರೆ.  ಪಾಲಿಕೆ ವ್ಯಾಪ್ತಿಗೆ ಸೇರಿದ ಇಬ್ಬರು ಶಾಸಕರು ಸೇರಿದಂತೆ 62 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡರು.  ಚುನಾವಣಾಧಿಕಾರಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ ಜೆ ಸಿ ಪ್ರಕಾಶ್ ಚುನಾವಣೆ ನಡೆಸಿಕೊಟ್ಟರು.

Ads on article

Advertise in articles 1

advertising articles 2

Advertise under the article