-->

ಮದ್ಯದ ಮತ್ತಲ್ಲಿ ಸ್ನೇಹಿತರ ಮಧ್ಯೆ ಬಾರ್​ನಲ್ಲಿ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಮದ್ಯದ ಮತ್ತಲ್ಲಿ ಸ್ನೇಹಿತರ ಮಧ್ಯೆ ಬಾರ್​ನಲ್ಲಿ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಮೈಸೂರು: ಮದ್ಯದ ಮತ್ತಲ್ಲಿ ಸ್ನೇಹಿತರ ಮಧ್ಯೆ ಬಾರ್​ನಲ್ಲಿ ಆರಂಭವಾದ ಜಗಳ, ಬಾರ್​ನಿಂದ ಹೊರಬಂದ ಬಳಿಕವೂ ಮುಂದುವರೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. 

ಮೈಸೂರಿನ ಆಲನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಆಲನಹಳ್ಳಿ ಬಾರ್ ಆ್ಯಂಡ್​ ರೆಸ್ಟೋರೆಂಟ್​ವೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭ ಸ್ನೇಹಿತರ ಮಧ್ಯೆ ಜಗಳ ಆರಂಭವಾಗಿತ್ತು. ನಿವೇಶನವೊಂದರ ವಿಚಾರವಾಗಿ ಶುರುವಾದ ಈ ಜಗಳ ಬಾರ್​ನಿಂದ ಹೊರಬಂದ ಬಳಿಕವೂ ಮುಗಿದಿರಲಿಲ್ಲ.
 
ಬಾರ್​ನಿಂದ ಹೊರಬಂದಾಗ ನಡೆದ ವಾಗ್ವಾದದ ಸಂದರ್ಭ ಸ್ನೇಹಿತರಾದ ರಾಕೇಶ್, ಮಹೇಶ್, ಪ್ರಮೋದ್‌ ಅವರು ಕಿರಣ್​ಗೆ ಚಾಕುವಿನಿಂದ ಇರಿದಿದ್ದರು. ಗಾಯಗೊಂಡ ಕಿರಣ್ ಸಾವಿಗೀಡಾಗಿದ್ದು, ರಾಕೇಶ್ ಹಾಗೂ ಮಹೇಶ್​ನನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮೋದ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article