-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಹಡಗಿನಲ್ಲಿ ತಪ್ಪಿ ಮಂಗಳೂರಿಗೆ ಬಂದಿದ್ದ ಬಾಲಕ ಸೇರಿದಂತೆ ಇಬ್ಬರು ಮನೆಯವರು ಕರೆದುಕೊಂಡು ಹೋಗುವ ಮುಂಚೆ ನಾಪತ್ತೆ!

ಹಡಗಿನಲ್ಲಿ ತಪ್ಪಿ ಮಂಗಳೂರಿಗೆ ಬಂದಿದ್ದ ಬಾಲಕ ಸೇರಿದಂತೆ ಇಬ್ಬರು ಮನೆಯವರು ಕರೆದುಕೊಂಡು ಹೋಗುವ ಮುಂಚೆ ನಾಪತ್ತೆ!




ಮಂಗಳೂರು : ಮಂಗಳೂರಿನ ಬೋಂದೆಲ್‌ನಲ್ಲಿರುವ ಬಾಲಕರ ಬಾಲ ಮಂದಿರದಿಂದ ನ . 28 ರ ಮುಂಜಾನೆ ಸ್ಯಾಮವೆಲ್ ಟೊಪ್ಪು ( 16 ) ಮತ್ತು ವಡಲಮನಿ ಚಿರಂಜೀವಿ ( 16 ) ಎಂಬ ಇಬ್ಬರು ಬಾಲಕರುನಾಪತ್ತೆಯಾದ ಘಟನೆ ನಡೆದಿದೆ . 

ವಡಲಮನಿ ಚಿರಂಜೀವಿ ಹಡಗಿನ ಒಳಗೆ ಮಲಗಿಕೊಂಡು ಮಂಗಳೂರು ತಲುಪಿದ್ದ .ಈತ ಆಂಧ್ರ ಪ್ರದೇಶ ದವನಾಗಿದ್ದು ವಿಶಾಖ ಪಟ್ಟಣ ಬಂದರಿನಿಂದ ಹಡಗಿನ ಮೂಲಕ ಮಂಗಳೂರಿಗೆ ಬಂದಿದ್ದ. ಈತ ಬಂದರಿನಲ್ಲಿ ವಿಶಾಖಪಟ್ಟಣ ಕೆಲಸಕ್ಕೆಂದು ತೆರಳಿದ್ದು  ಹಡಗಿನ ಒಳಗೆ ಆಕಸ್ಮಿಕವಾಗಿ ಹೋಗಿದ್ದನು . ಇದನ್ನು ಹಡಗಿನ ಸಿಬ್ಬಂದಿ ಗಮನಿಸಿರಲಿಲ್ಲ . ಕಲ್ಲಿದ್ದಲು ತುಂಬಿದ್ದ ಹಡಗು ಅನಂತರ ಮಂಗಳೂರಿಗೆ ಬಂದಿತ್ತು . ಹಡಗಿನ ಸಿಬಂದಿ ಮಂಗಳೂರು ಬಂದರಿನಲ್ಲಿ ಈತನನ್ನು ಇಳಿಸಿ ಕರಾವಳಿ ಕಾವಲು ಪೊಲೀಸರಿಗೆ  ದೂರನ್ನು ನೀಡಿದ್ದರು . ವಿಚಾರಣೆ ವೇಳೆ ಈ ಯುವಕ ತಾನು ಆಕಸ್ಮಿಕವಾಗಿ ಹಡಗಿನ ಒಳಗೆ ಹೋಗಿದ್ದು ಅನಂತರ ನಿದ್ದೆ ಬಂದಿತ್ತು ಎಂದು ಹೇಳಿದ್ದಾನೆ . ಈತ ಕಳೆದ ಶುಕ್ರವಾರ ಮಂಗಳೂರು ತಲುಪಿದ್ದು ಈತನನ್ನು ಕರಾವಳಿ ಕಾವಲು ಪೊಲೀಸರು ಮಕ್ಕಳ ಕಲ್ಯಾಣ  ಸಮಿತಿಯವರಿಗೆ ಒಪ್ಪಿಸಿದ್ದರು . ಬಾಲಮಂದಿರದಲ್ಲಿ ಈತನನ್ನು ಇಟ್ಟುಕೊಂಡು ಮನೆಗೆ ತಲುಪಿಸಲು ಸಿದ್ಧತೆ ನಡೆದಿತ್ತು . ಅಷ್ಟರಲ್ಲಿ ಈತ ತಪ್ಪಿಸಿಕೊಂಡಿದ್ದಾನೆ . 

ಸ್ಯಾಮುವಲ್ ಟೊಪ್ಪು ಎಂಬಾತ ಮೂಲತಃ  ಛತ್ತೀಸ್‌ಗಡದವನು . ಈತ ಸುರತ್ಕಲ್ ಮೀನು ಸಂಸ್ಕರಣ ಘಟಕವೊಂದರಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕ ಇಲಾಖೆಯವರು ಅಕ್ಟೋಬರ್‌ನಲ್ಲಿ ಹಚ್ಚಿದ್ದರು . ಆತನನ್ನು ಪತ್ತೆ ಬಾಲಮಂದಿರದಲ್ಲಿ ಮನೆಯವರಿಗೆ ಇಟ್ಟು ಮಾಹಿತಿ ನೀಡ ಇಬ್ಬರೂ ಲಾಗಿತ್ತು . 

ಈ ಇಬ್ಬರು ಬಾಲಕರ ಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಮನೆಯವರು ಬರುವ ಮುಂಚೆಯೇ ಈ ಬಾಲಕರಿಬ್ಬರು ನಾಪತ್ತೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ