-->

ಮೂಡಬಿದಿರೆ ಸಿಡಿಲಿನ ಆರ್ಭಟಕ್ಕೆ ಇಬ್ಬರು ಸ್ಥಳದಲ್ಲೆ ಸಾವು- ದ.ಕ ಜಿಲ್ಲೆಯಲ್ಲಿ ನಾಲ್ಕು ದಿನದಲ್ಲಿ ನಾಲ್ವರ ಸಾವು

ಮೂಡಬಿದಿರೆ ಸಿಡಿಲಿನ ಆರ್ಭಟಕ್ಕೆ ಇಬ್ಬರು ಸ್ಥಳದಲ್ಲೆ ಸಾವು- ದ.ಕ ಜಿಲ್ಲೆಯಲ್ಲಿ ನಾಲ್ಕು ದಿನದಲ್ಲಿ ನಾಲ್ವರ ಸಾವು


ಮೂಡುಬಿದಿರೆ: ಮೂಡಬಿದಿರೆಯ ಪುತ್ತಿಗೆ ಪಂ. ವ್ಯಾಪ್ತಿಯ ಕಂಚಿಬೈಲು ಅರ್ಬಿ ಪ್ರದೇಶದಲ್ಲಿ ಸೋಮವಾರ ಸಂಜೆ ಸಿಡಿಲಿನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ.


ಯಶವಂತ , ಮಣಿಪ್ರಸಾದ ಎಂಬ ಇಬ್ಬರು ಸಿಡಿಲಿನ ಅಬ್ಬರಕ್ಕೆ‌ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಇವರು ಅರ್ಬಿ ಪ್ರದೇಶದಲ್ಲಿ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.

 ಇವರ ಜೊತೆಗಿದ್ದ ಗಣೇಶ, ಸಂದೀಪ ಮತ್ತು ಪ್ರವೀಣ ಎಂಬವರಿಗೂ ಸಿಡಿಲಿನ ಅಬ್ಬರಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


ಶುಕ್ರವಾರ ದ ಬಳಿಕ ನಾಲ್ವರ ಸಾವು

ಸಿಡಿಲಿನ ಅಬ್ಬರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಶುಕ್ರವಾರದಂದು ಪುತ್ತೂರು ತಾಲೂಕಿನ ಓರ್ವರು, ಶನಿ ವಾರದಂದು ಉಳ್ಳಾಲದ ಓರ್ವರು, ಇಂದು ಮೂಡಬಿದಿರೆಯ ಇಬ್ಬರು ಸಾವನ್ನಪ್ಪಿದ್ದಾರೆ.
 

Ads on article

Advertise in articles 1

advertising articles 2

Advertise under the article