ಮಂಗಳೂರು ಅತ್ತಾವರದ ಆಮಂತ್ರಣ ವಸತಿಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಸತಿ ಗೃಹದ ಮ್ಯಾನೇಜರ್ ಚಂದ್ರಶೇಖರ್ ಮತ್ತು ರೂಮ್ ಬಾಯ್ ಹರೀಶ್ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಮಂಗಳೂರು ಅತ್ತಾವರದ ಆಮಂತ್ರಣ ವಸತಿಗೃಹದಲ್ಲಿ ಮ್ಯಾನೇಜರ್ ಚಂದ್ರಶೇಖರ್ ಮತ್ತು ಹರೀಶ್ ಪೂಜಾರಿ ಅವರು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ, ವಸತಿಗೃಹದ ಕೊಠಡಿ ಸಂಖ್ಯೆ 211 ಮತ್ತು 212ರಲ್ಲಿ ಹಣಕ್ಕಾಗಿ ಗಿರಾಕಿಗಳನ್ನು ಕರೆಯಿಸಿ ಈ ದಂಧೆ ನಡೆಸುತ್ತಿರುವುದು ಬಯಲಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನೊಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ಗಿರಾಕಿಗಳು ಮತ್ತು ನೊಂದ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಆರೋಪಿಗಳು ಹಣಕ್ಕಾಗಿ ದಂಧೆ ನಡೆಸುತ್ತಿರುವುದು ದೃಢಪಟ್ಟಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

