youth suicide at Udupi | ಬ್ಯಾಂಕ್ ಉದ್ಯೋಗಿ, ಸ್ಫುರದ್ರೂಪಿ ಯುವಕ ಆತ್ಮಹತ್ಯೆ: ಬದುಕಿಗೆ ಅಂತ್ಯವಾಡಲು ಕಾರಣವೇನು?
Wednesday, December 23, 2020
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸೊಸೈಟಿ ಬ್ಯಾಂಕೊಂದರಲ್ಲಿ ನೌಕರಿ ಮಾಡಿಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಈ ಕೃತ್ಯ ನಡೆಸಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ.
ಬ್ರಹ್ಮಾವರ ಉಪ್ಪಿನ ಕೋಟೆ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಪ್ರಥ್ವಿ ಆತ್ಮಹತ್ಯೆ ಮಾಡಿಕೊಂಡವರು. ಈ ಸಾವಿನ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಸ್ಫುರದ್ರೂಪಿ ಯುವಕ ಪ್ರಥ್ವಿ ಹೀಗೆ ಏಕಾಏಕಿ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಆತನ ಬಂಧು ಮಿತ್ರರಿಗೆ ಶಾಕ್ ನೀಡಿದೆ.