-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಪ್ರಭು ಸಾಧನೆ

ಮಂಗಳೂರು: ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಪ್ರಭು ಸಾಧನೆ

ಮಂಗಳೂರು: ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಪ್ರಭು ಸಾಧನೆ





ಮಂಗಳೂರಿನ ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಎಸ್. ಪ್ರಭು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.



ಮಂಗಳೂರಿನ ವಕೀಲರಾದ ಶ್ರೀಪತಿ ಪ್ರಭು ಮತ್ತು ಗೌರಿ ಎಸ್. ಪ್ರಭು ಅವರ ಪುತ್ರಿಯಾಗಿರುವ ಆದಿತಿ ಅವರ ಸಾಧನೆಗೆ ಅವರ ಕುಟುಂಬ ವರ್ಗ ಅಪಾರ ಮೆಚ್ಚುಗೆ ಮತ್ತು ಹರ್ಷ ವ್ಯಕ್ತಪಡಿಸಿದೆ.



ಯಾವುದೇ ಟ್ಯೂಷನ್ ಪಡೆಯದೆ ಮನೆಯಲ್ಲೇ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಆದಿತಿ ಈ ಸಾಧನೆ ಮಾಡಿದ್ದಾರೆ. ಇದಕ್ಕೆ ಹೈಸ್ಕೂಲ್ ಅಧ್ಯಾಪಕ ವೃಂದದ ಅಪಾರ ಬೆಂಬಲ ಮತ್ತು ವಿಶೇಷ ಗಮನವೂ ಕಾರಣ ಎಂದು ಆದಿತಿ ಪ್ರಭು ಅವರ ತಂದೆ ಶ್ರೀಪತಿ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.



ಆದಿತಿ ಅವರ ಸಾಧನೆ ಇಡೀ ಕುಟುಂಬಕ್ಕೆ ಹರ್ಷ ತಂದಿದ್ದು, ಈ ಸಾಧನೆಯನ್ನು ಕುಟುಂಬ ವರ್ಗ ಸೇರಿ ಸಂಭ್ರಮಿಸಿದ್ದಾರೆ.


Adithi S. Prabhu


Ads on article

Advertise in articles 1

advertising articles 2

Advertise under the article

ಸುರ