-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
No meat-vhp appeal- ಗಣೇಶ ಚತುರ್ಥಿ, ಗಾಂಧಿ ಜಯಂತಿ ಮಾಂಸ ರಹಿತ ದಿನವಾಗಿ ಆಚರಣೆ; ವಿಹಿಂಪ ಮನವಿ

No meat-vhp appeal- ಗಣೇಶ ಚತುರ್ಥಿ, ಗಾಂಧಿ ಜಯಂತಿ ಮಾಂಸ ರಹಿತ ದಿನವಾಗಿ ಆಚರಣೆ; ವಿಹಿಂಪ ಮನವಿ




ಗಣೇಶ ಚತುರ್ಥಿ, ಗಾಂಧಿ ಜಯಂತಿ ಮಾಂಸ ರಹಿತ ದಿನವಾಗಿ ಆಚರಣೆ ಮಾಡುವಂತೆ ವಿಹಿಂಪ ಮನವಿ ಮಾಡಿದೆ.



ಕರ್ನಾಟಕ ಸರ್ಕಾರದ 11 ದಿನಗಳನ್ನು ಮಾಂಸಾಹಾರ ರಹಿತ ದಿನಗಳಾಗಿ ಆಚರಿಸುವಂತೆ (ಆದೇಶ ಸಂಖ್ಯೆ -. HUD. 65 CGL-78 ತಾರೀಕು - 08.01.1979 ) ಆದೇಶ ನೀಡಿದೆ. ಆ ಆದೇಶದಂತೆ ಬರುವ ಸೆಪ್ಟೆಂಬರ್ 10 ನೇ ತಾರೀಕು ಗಣೇಶ ಚತುರ್ಥಿಯಂದು ಮತ್ತು ಒಕ್ಟೋಬರ್ 2 ಗಾಂಧಿಜಯಂತಿಯಂದು ಮಾಂಸಾಹಾರ ರಹಿತ ದಿನಗಳಾಗಿ ಆಚರಿಸುವಂತೆ ಆದೇಶ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.



ಈ ದಿನದಂದು ಕಸಾಯಿಖಾನೆಗಳನ್ನು ಮತ್ತು ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಕಮಿಷನರ್, ಪಂಚಾಯತ್, ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.



ಗಣೇಶ ಚತುರ್ಥಿಯಂದು ಮತ್ತು ಗಾಂಧಿಜಯಂತಿಯಂದು ಮಾಂಸ ರಹಿತ ದಿನವನ್ನಾಗಿ ಆಚರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪುವೆಲ್ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ