-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
18 ಮೆಟ್ಟಿಲೇರಿದ ಕೂಡಲೇ ದರುಶನ: ಶಬರಿಮಲೆಯಲ್ಲಿ ಭಕ್ತರ ದರ್ಶನ ಮಾರ್ಗ ಬದಲಿಗೆ ನಿರ್ಧಾರ

18 ಮೆಟ್ಟಿಲೇರಿದ ಕೂಡಲೇ ದರುಶನ: ಶಬರಿಮಲೆಯಲ್ಲಿ ಭಕ್ತರ ದರ್ಶನ ಮಾರ್ಗ ಬದಲಿಗೆ ನಿರ್ಧಾರ

18 ಮೆಟ್ಟಿಲೇರಿದ ಕೂಡಲೇ ದರುಶನ: ಶಬರಿಮಲೆಯಲ್ಲಿ ಭಕ್ತರ ದರ್ಶನ ಮಾರ್ಗ ಬದಲಿಗೆ ನಿರ್ಧಾರ





ಕೇರಳದ ಪವಿತ್ರ ಯಾತ್ರಾಸ್ಥಳವಾದ ಶಬರಿಮಲೆಯಲ್ಲಿ ಭಕ್ತರ ದರ್ಶನ ಮಾರ್ಗ ಬದಲಿಗೆ ನಿರ್ಧಾರ ಮಾಡಲಾಗಿದೆ.

ಭಕ್ತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಶಬರಿಮಲೆಯಲ್ಲಿ ದರ್ಶನದ ಮಾರ್ಗವನ್ನು ಬದಲಿಸಲು ನಿರ್ಧಾರ ಕೈಗೊಂಡಿದೆ.


ಇದರಿಂದ ಭಕ್ತರಿಗೆ ಸನ್ನಿಧಾನಂ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಕೂಡದೇ ದರ್ಶನದ ಭಾಗ್ಯ ದೊರೆಯಲಿದೆ.


ಮಾರ್ಚ್‌ 15ರಿಂದ ಪ್ರಾರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ವಿಷು ಪೂಜಾ ಸಮಯದಲ್ಲೂ ಇದು ಮಂದುವರಿಯುತ್ತದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿದ್ದಾರೆ.


ಭಕ್ತರ ಮಾರ್ಗ ಬದಲಿಗೆ ನಿರ್ಧಾರ ಕೈಗೊಂಡಿರುವುದು ಭಕ್ತ ಸಮುದಾಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ.


Ads on article

Advertise in articles 1

advertising articles 2

Advertise under the article