-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮದ್ಯದ ಮತ್ತಲ್ಲಿ ಆಡಿದ ಮಾತೇ ವ್ಯಕ್ತಿಯ ಪ್ರಾಣಕ್ಕೆ ಕುತ್ತಾಯಿತು: ಪ್ರಕರಣ ದಾಖಲಾದ ಆರೇ ಗಂಟೆಗಳಲ್ಲಿ ಆರೋಪಿಗಳು ಅಂದರ್

ಮದ್ಯದ ಮತ್ತಲ್ಲಿ ಆಡಿದ ಮಾತೇ ವ್ಯಕ್ತಿಯ ಪ್ರಾಣಕ್ಕೆ ಕುತ್ತಾಯಿತು: ಪ್ರಕರಣ ದಾಖಲಾದ ಆರೇ ಗಂಟೆಗಳಲ್ಲಿ ಆರೋಪಿಗಳು ಅಂದರ್

ಬೆಂಗಳೂರು: ಮದ್ಯದ ಮತ್ತಿನಲ್ಲಿ ಆಡಿರುವ ಮಾತೇ ವ್ಯಕ್ತಿಯೋರ್ವರ ಪ್ರಾಣಕ್ಕೆ ಕುತ್ತಾಗಿದೆ. ಕೊಲೆಗೈದಿರುವ ಆರೋಪಿಗಳನ್ನು ಪ್ರಕರಣದ ದಾಖಲಾದ ಆರೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಮಂಜುನಾಥ್ ಕೊಲೆಯಾದ ಆಟೋ ಚಾಲಕ, ಮಧುಸೂದನ್ ಮತ್ತು ಯತೀಶ್ ಗೌಡ ಕೊಲೆಗೈದಿರುವ ಆರೋಪಿಗಳು. 

ನಗರದ ಜೀವನ್​ಬಿಮಾ ನಗರದಲ್ಲಿ ಮೊನ್ನೆ ರಾತ್ರಿ ಬಾರ್​ವೊಂದಕ್ಕೆ ತೆರಳಿದ್ದ ಮಂಜುನಾಥ್ ಮದ್ಯಪಾನ ಮಾಡಿ ಪಾನಮತ್ತನಾಗಿ ಹೊರಬಂದಿದ್ದ. ಆಗ ಹೊರಗಡೆ ಇದ್ದ ಆಟೋವೊಂದನ್ನು ಏರಿದ್ದ. ಆಗ ಆಟೋದಲ್ಲಿದ್ದ ಮಧುಸೂದನ್ ಮತ್ತು ಯತೀಶ್​ ಗೌಡ ಆತನನ್ನು ಆಟೋದಿಂದ ಇಳಿಯುವಂತೆ ಹೇಳಿದ್ದರು. ಆದರೆ ಮಂಜುನಾಥ್ ಮದ್ಯದ ಅಮಲಿನಲ್ಲಿ ಅವರನ್ನು ಕೆಟ್ಟದಾಗಿ ಬೈದಿದ್ದ.

ಇದರಿಂದ ಕೆರಳಿದ ಅವರಿಬ್ಬರು ಈತನಿಗೆ ಸರಿಯಾಗಿ ಥಳಿಸಿದ್ದಾರೆ. ಆಗ ಬಾರ್ ಸಿಬ್ಬಂದಿ ಮತ್ತು ಸಾರ್ವಜನಿಕರು ಈ ಜಗಳವನ್ನು ಬಿಡಿಸಿ ಕಳಿಸಿದ್ದರು. ಬಾರ್​ನಿಂದ ಅನತಿ ದೂರ ಸಾಗಿ ಫುಟ್​ಪಾತ್ ಮೇಲೆ ಮಂಜುನಾಥ್ ಕೂತಿದ್ದ. ಆಗ ಮಧುಸೂದನ್ ಮತ್ತು ಯತೀಶ್​ ಆಟೋದಲ್ಲಿ ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಮತ್ತೆ ಗಲಾಟೆ ನಡೆದಿದೆ. ಈ ಸಂದರ್ಭ ಅವರು ಇಟ್ಟಿಗೆ ಹಾಗೂ ಕಬ್ಬಿಣದ ಪೈಪ್​ನಿಂದ ಮಂಜುನಾಥ್ ಗೆ ಹೊಡೆದಿದ್ದಾರೆ.

ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಕುರಿತು ಜೀವನ್​ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೇವಲ ಆರೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ