-->

ಮದ್ಯದ ಮತ್ತಲ್ಲಿ ಆಡಿದ ಮಾತೇ ವ್ಯಕ್ತಿಯ ಪ್ರಾಣಕ್ಕೆ ಕುತ್ತಾಯಿತು: ಪ್ರಕರಣ ದಾಖಲಾದ ಆರೇ ಗಂಟೆಗಳಲ್ಲಿ ಆರೋಪಿಗಳು ಅಂದರ್

ಮದ್ಯದ ಮತ್ತಲ್ಲಿ ಆಡಿದ ಮಾತೇ ವ್ಯಕ್ತಿಯ ಪ್ರಾಣಕ್ಕೆ ಕುತ್ತಾಯಿತು: ಪ್ರಕರಣ ದಾಖಲಾದ ಆರೇ ಗಂಟೆಗಳಲ್ಲಿ ಆರೋಪಿಗಳು ಅಂದರ್

ಬೆಂಗಳೂರು: ಮದ್ಯದ ಮತ್ತಿನಲ್ಲಿ ಆಡಿರುವ ಮಾತೇ ವ್ಯಕ್ತಿಯೋರ್ವರ ಪ್ರಾಣಕ್ಕೆ ಕುತ್ತಾಗಿದೆ. ಕೊಲೆಗೈದಿರುವ ಆರೋಪಿಗಳನ್ನು ಪ್ರಕರಣದ ದಾಖಲಾದ ಆರೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಮಂಜುನಾಥ್ ಕೊಲೆಯಾದ ಆಟೋ ಚಾಲಕ, ಮಧುಸೂದನ್ ಮತ್ತು ಯತೀಶ್ ಗೌಡ ಕೊಲೆಗೈದಿರುವ ಆರೋಪಿಗಳು. 

ನಗರದ ಜೀವನ್​ಬಿಮಾ ನಗರದಲ್ಲಿ ಮೊನ್ನೆ ರಾತ್ರಿ ಬಾರ್​ವೊಂದಕ್ಕೆ ತೆರಳಿದ್ದ ಮಂಜುನಾಥ್ ಮದ್ಯಪಾನ ಮಾಡಿ ಪಾನಮತ್ತನಾಗಿ ಹೊರಬಂದಿದ್ದ. ಆಗ ಹೊರಗಡೆ ಇದ್ದ ಆಟೋವೊಂದನ್ನು ಏರಿದ್ದ. ಆಗ ಆಟೋದಲ್ಲಿದ್ದ ಮಧುಸೂದನ್ ಮತ್ತು ಯತೀಶ್​ ಗೌಡ ಆತನನ್ನು ಆಟೋದಿಂದ ಇಳಿಯುವಂತೆ ಹೇಳಿದ್ದರು. ಆದರೆ ಮಂಜುನಾಥ್ ಮದ್ಯದ ಅಮಲಿನಲ್ಲಿ ಅವರನ್ನು ಕೆಟ್ಟದಾಗಿ ಬೈದಿದ್ದ.

ಇದರಿಂದ ಕೆರಳಿದ ಅವರಿಬ್ಬರು ಈತನಿಗೆ ಸರಿಯಾಗಿ ಥಳಿಸಿದ್ದಾರೆ. ಆಗ ಬಾರ್ ಸಿಬ್ಬಂದಿ ಮತ್ತು ಸಾರ್ವಜನಿಕರು ಈ ಜಗಳವನ್ನು ಬಿಡಿಸಿ ಕಳಿಸಿದ್ದರು. ಬಾರ್​ನಿಂದ ಅನತಿ ದೂರ ಸಾಗಿ ಫುಟ್​ಪಾತ್ ಮೇಲೆ ಮಂಜುನಾಥ್ ಕೂತಿದ್ದ. ಆಗ ಮಧುಸೂದನ್ ಮತ್ತು ಯತೀಶ್​ ಆಟೋದಲ್ಲಿ ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಮತ್ತೆ ಗಲಾಟೆ ನಡೆದಿದೆ. ಈ ಸಂದರ್ಭ ಅವರು ಇಟ್ಟಿಗೆ ಹಾಗೂ ಕಬ್ಬಿಣದ ಪೈಪ್​ನಿಂದ ಮಂಜುನಾಥ್ ಗೆ ಹೊಡೆದಿದ್ದಾರೆ.

ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಕುರಿತು ಜೀವನ್​ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೇವಲ ಆರೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article