-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪತಿಯನ್ನು ಅರಸಿ ಭಾರತಕ್ಕೆ ಆಗಮಿಸಿದ ಬಾಂಗ್ಲಾದ ಮಹಿಳೆಗೆ ಕಾದಿತ್ತು ಬಿಗ್ ಶಾಕ್

ಪತಿಯನ್ನು ಅರಸಿ ಭಾರತಕ್ಕೆ ಆಗಮಿಸಿದ ಬಾಂಗ್ಲಾದ ಮಹಿಳೆಗೆ ಕಾದಿತ್ತು ಬಿಗ್ ಶಾಕ್


ಲಕ್ನೋ: ಇತ್ತೀಚೆಗೆ ದೇಶ ಗಡಿ ಮೀರಿದ ಪ್ರೇಮ ಪ್ರಕರಣಗಳೇ ಭಾರೀ ಸುದ್ದಿಯಲ್ಲಿದೆ. ಪಾಕಿಸ್ತಾನದ ಸೀಮಾ ಹೈದರ್​ ತಮ್ಮ ಪ್ರಿಯಕರನಿಗಾಗಿ ದೇಶದ ಗಡಿ ದಾಟಿ ಬಂದರೆ, ಭಾರತದ ಅಂಜು ಗಡಿ ದಾಟಿ ಹೋಗಿದ್ದಾಳೆ. ಅಲ್ಲದೆ ಶ್ರೀಲಂಕಾದ ಯುವತಿಯೊಬ್ಬಳು ಪ್ರಿಯರನನ್ನು ಅರಸಿ ಭಾರತ ಪ್ರವೇಶಿಸಿದ್ದಳು. ಈ ಗಡಿದಾಟಿದ ಪ್ರೇಮಕಥೆಗಳ ನೆನಪು ಮಾಸುವ ಮುನ್ನವೇ ಅದೇ ರೀತಿಯ ಪ್ರೇಮ ಪ್ರಕರಣವೊಂದು ಈ ಲಿಸ್ಟ್ ಗೆ ಹೊಸದಾಗಿ ಸೇರ್ಪಡೆಯಾಗಿದೆ.

ಬಾಂಗ್ಲಾದೇಶದ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನೊಂದಿಗೆ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿ ಬಂದ ಬಳಿಕ ಆಕೆಯ ಪತಿಯ ವಿಚಾರ ತಿಳಿದು ಮಹಿಳೆ ಕಂಗಾಲಾಗಿದ್ದು, ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಉತ್ತರಪ್ರದೇಶದ​ ನೊಯ್ಡಾದ ನಿವಾಸಿ ಸೌರಭ್ ಕಾಂತ್​​ ತಿವಾರಿ 2017ರಲ್ಲಿ ಉದ್ಯೋಗದ ನಿಮಿತ್ತ ಬಾಂಗ್ಲಾದೇಶಕ್ಕೆ ತೆರಳಿದ್ದನು. ಅಲ್ಲಿಯೇ ಇದ್ದ ಆತ ಕೆಲ ವರ್ಷಗಳ ಬಳಿಕ ಸಾನ್ಯ ಅಖ್ತರ್​ ಎಂಬಾಕೆಯನ್ನು ವಿವಾಹವಾಗಿದ್ದ. ಇಬ್ಬರ ದಾಂಪತ್ಯದ ಫಲವಾಗಿ ಮಗುವೊಂದು ಜನಿಸಿದ ಕೆಲ ತಿಂಗಳುಗಳ ಬಳಿಕ ಸೌರಭ್​ ಭಾರತಕ್ಕೆ ವಾಪಸ್​ ಆಗಿದ್ದು, ಬಾಂಗ್ಲಾದೇಶದತ್ತ ಹೋಗಿಲ್ಲ.

ವರ್ಷಗಳು ಕಳೆದರೂ ತನ್ನ ಪತಿ ಬಾರದೇ ಇರುವುದರಿಂದ ಅನುಮಾನಗೊಂಡ ಮಹಿಳೆ ಆತನನ್ನು ಹುಡುಕಿಕೊಂಡು ನೊಯ್ಡಾಗೆ ಬಂದಿದ್ದಾಳೆ. ಇಲ್ಲಿ ಆಕೆ ಪತಿಗೆ ಈಗಾಗಲೇ ಬೇರೊಂದು ಮದುವೆಯಾಗಿರುವುದನ್ನು ನೋಡಿ ಕಂಗಾಲಾಗಿದ್ದಾಳೆ. ಬಳಿಕ ಈ ಬಗ್ಗೆ ಆತನ ಬಳಿ ಮಾತನಾಡಿದಾಗ ನಿನ್ನೊಂದಿಗೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ಸೌರಭ್​ ಮಹಿಳೆಗೆ ಹೇಳಿ ಕಳುಹಿಸಿದ್ದಾನೆ. ಪತಿಯ ಹೇಳಿಕೆಯಿಂದ ತೀವ್ರ ಅಘಾತಕ್ಕೊಳಗಾದ ಮಹಿಳೆ ತನಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ಸ್ಥಳೀಯ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಢಾಕಾ ಮೂಲದ ಮಹಿಳೆ ಸಾನ್ಯ ಅಖ್ತರ್​ ಸೌರಭ್ ಕಾಂತ್ ತಿವಾರಿ ಎಂಬ ವ್ಯಕ್ತಿಯು ತನ್ನನ್ನು ಎಪ್ರಿಲ್ 14 2021ರಂದು ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಮಹಿಳೆ ಮತ್ತು ಸೌರಭ್​ಗೆ ಒಬ್ಬ ಪುತ್ರ ಕೂಡ ಇದ್ದಾನೆ. ಆದರೆ ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿರುವುದಾಗಿ ಹಿರಿಯ ಪೊಲೀಸ್​​ ಅಧಿಕಾರಿ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article

ಸುರ