-->

ಸುರತ್ಕಲ್: ಬೆಳ್ಳಂಬೆಳಗ್ಗೆ ಮೀನುಗಾರನಿಗೆ ಭರ್ಜರಿ ಮೀನು ಬೇಟೆ; ಖರೀದಿಗೆ ಮುಗಿಬಿದ್ದ ಮೀನುಪ್ರಿಯರು

ಸುರತ್ಕಲ್: ಬೆಳ್ಳಂಬೆಳಗ್ಗೆ ಮೀನುಗಾರನಿಗೆ ಭರ್ಜರಿ ಮೀನು ಬೇಟೆ; ಖರೀದಿಗೆ ಮುಗಿಬಿದ್ದ ಮೀನುಪ್ರಿಯರು

ಮಂಗಳೂರು: ನಗರದ ಸುರತ್ಕಲ್ ನಲ್ಲಿ ಹಾಕಿರುವ ಜೀವನ್ ಪಿರೇರಾ ಎಂಬ ಮೀನುಗಾರನ ಕೈರಂಪೊನಿ ಬಲೆಗೆ ಭರ್ಜರಿ ಮೀನು ಬಿದ್ದಿದೆ. ಮೀನುಗಾರನಿಗೆ ಅದೃಷ್ಟ ಲಕ್ಷ್ಮಿ ಒಲಿದರೆ, ಮೀನುಪ್ರಿಯರು ಮೀನು ಖರೀದಿಗೆ ಮುಗಿಬಿದ್ದಿದ್ದಾರೆ.


ಮಂಗಳೂರು ನಗರದ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಇಂದು ಬೆಳಗ್ಗೆ ಜೀವನ್ ಪಿರೇರಾ ಕೈರಂಪೊನಿ ಬಲೆ ಬೀಸಿದ್ದಾರೆ. ಈ ಕೈರಂಪೊನಿ ಬಲೆಗೆ ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಸಮೂಹವೇ ಬಿದ್ದಿದೆ. ಈ ರಾಶಿ ರಾಶಿ ಮೀನುಗಳನ್ನು ಕಂಡು ಮೀನುಪ್ರಿಯರು ಫುಲ್ ಖುಷ್ ಆಗಿದ್ದು, ಖರೀದಿಗೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. 









ಜೀವನ್ ಪಿರೇರಾ ದಡದಿಂದ ಬೀಸುವ ಕೈರಂಪೊನಿ ಬಲೆಯನ್ನು ಹಾಕಿದ್ದು, ಆದರೆ ಈ ಕೈರಂಪೊನಿ ಬಲೆಗೆ 400 ಕೆಜಿಯಷ್ಟು ಮೀನು ಬಿದ್ದಿರೋದು ಮೀನುಗಾರನಿಗೆ ಅದೃಷ್ಟ ಲಕ್ಷ್ಮಿಯೇ ಒಲಿದಂತಾಗಿದೆ‌.



Ads on article

Advertise in articles 1

advertising articles 2

Advertise under the article