-->

ಇಂದು "ವರದ ಸಂಕಷ್ಟ ಚತುರ್ಥಿ": ಪೂಜೆಯ ವಿಧಾನ, ಮಹತ್ವ ಹಾಗೂ ಗಣೇಶ ನಾಮಾವಳಿ

ಇಂದು "ವರದ ಸಂಕಷ್ಟ ಚತುರ್ಥಿ": ಪೂಜೆಯ ವಿಧಾನ, ಮಹತ್ವ ಹಾಗೂ ಗಣೇಶ ನಾಮಾವಳಿ

ಇಂದು "ವರದ ಸಂಕಷ್ಟ ಚತುರ್ಥಿ": ಪೂಜೆಯ ವಿಧಾನ, ಮಹತ್ವ ಹಾಗೂ ಗಣೇಶ ನಾಮಾವಳಿ





ಜುಲೈ 3 ರಂದು ಭಾನುವಾರ ವರದ ಸಂಕಷ್ಟ ಚತುರ್ಥಿ 2022 ನ್ನು ಆಚರಿಸಲಾಗುವುದು. ಆಷಾಢ ಮಾಸದ ಮೊದಲ ಸಂಕಷ್ಟ ಚತುರ್ಥಿ ಇದು. ಆಷಾಢ ಮಾಸದ ಈ ವರದ ಸಂಕಷ್ಟ ಚತುರ್ಥಿಯ ಶುಭ ಮುಹೂರ್ತ ಹಾಗೂ ವರದ ಸಂಕಷ್ಟ ಚತುರ್ಥಿ ಪೂಜೆ ವಿಧಾನ, ಮಂತ್ರ ಮತ್ತು ಗಣೇಶ ನಾಮಾವಳಿ ಪಠಣೆಯ ವಿವರ ಇಲ್ಲಿದೆ.


ಪಂಚಾಂಗದ ಪ್ರಕಾರ, ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ ಮತ್ತು ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.

ಈ ದಿನ ಚತುರ್ಥಿ. ಗಣೇಶನ ಪೂಜೆ, ಸ್ತುತಿಗೆ ವಿಶೇಷ ಮಹತ್ವ. ಶುಕ್ಲ ಪಕ್ಷದಲ್ಲಿ ಬರುವ ಚತುರ್ಥಿಯನ್ನು ವರದ ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ.

ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸುತ್ತದೆ.




1. 2022 ವರದ ಸಂಕಷ್ಟ ಚತುರ್ಥಿ ಶುಭ ಮುಹೂರ್ತ:


ಆಷಾಢ ಶುಕ್ಲ ಚತುರ್ಥಿ ತಿಥಿ ಆರಂಭ : ಜುಲೈ 2 ರಂದು ಮಧ್ಯಾಹ್ನ 3:17 ರಿಂದ


ಆಷಾಢ ಶುಕ್ಲ ಚತುರ್ಥಿ ತಿಥಿ ಮುಕ್ತಾಯ: ಜುಲೈ 3 ರಂದು ಸಂಜೆ 05:07 ರವರೆಗೆ


ಆಷಾಢ ಶುಕ್ಲ ವಿನಾಯಕ ಚತುರ್ಥಿ ಉಪವಾಸ ಪ್ರಾರಂಭ: ಜುಲೈ 3 ರಂದು ಬೆಳಿಗ್ಗೆಯಿಂದ


ಉಪವಾಸ ಮತ್ತು ಪೂಜೆಗೆ ಶುಭ ಸಮಯ: ಜುಲೈ 3 ರಂದು ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 01:49 ರವರೆಗೆ


2. ವರದ ಚತುರ್ಥಿ ಆರಾಧನಾ ವಿಧಾನ:


ಭಕ್ತರು ಮುಂಜಾನೆ ಸ್ನಾನ ಮಾಡಿ ಕೆಂಪು ಬಣ್ಣದ ಬಟ್ಟೆ ಧರಿಸಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಗಣೇಶನಿಗೆ ಸಿಂಧೂರ ತಿಲಕವನ್ನು ಹಚ್ಚಿ. ಆರಾಧನೆ ಮಾಡುವಾಗ, ಗಣೇಶ ಮಂತ್ರ ಪಠಿಸಿ 21 ದುರ್ವಾ ಸಲ್ಲಿಸಿ. ಇದರೊಂದಿಗೆ ಗಣೇಶನಿಗೆ ಮೋದಕವನ್ನು ಕೂಡ ಸಲ್ಲಿಸಿ. ವಿಧಿ ವಿಧಾನದ ಪ್ರಕಾರ ಮೊದಲ ಆರಾಧನೆ ಗಣೇಶನಿಗೆ ಸಲ್ಲಬೇಕು. ನಂತರ ಆರತಿ ಮಾಡಿ. ಇದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ.


ವರದ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯು ಬರುತ್ತದೆ. ವರದ ಚತುರ್ಥಿ ವ್ರತದ ದಿನದಂದು, ಗಣೇಶನನ್ನು ಪೂಜಿಸಿದ ನಂತರ, ಬ್ರಾಹ್ಮಣರಿಗೆ ಆಹಾರವನ್ನು ನೀಡಿ ಮತ್ತು ಅವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ. ಓಂ ಗಣೇಶಾಯ ನಮಃ ಮಂತ್ರ ಜಪಿಸಿ, ಈ ಮೂಲಕ ಹಣಕಾಸು ಮತ್ತು ಆರೋಗ್ಯದ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.


3. ಗಣೇಶನನ್ನು ಪೂಜಿಸುವಾಗ ನೆನಪಿನಲ್ಲಿಡಿ:


ಧಾರ್ಮಿಕ ಗ್ರಂಥಗಳ ಪ್ರಕಾರ, ಗಣೇಶನ ಪೂಜೆಯಲ್ಲಿ ನೀವು ದೀಪವನ್ನು ಬೆಳಗಿಸುವಾಗ, ಆಗಾಗ್ಗೆ ಅದರ ಸ್ಥಳವನ್ನು ಬದಲಾಯಿಸಬೇಡಿ ಅಥವಾ ಗಣೇಶನ ಪೀಠದ ಮೇಲೆ ಇಡಬೇಡಿ. ದೀಪದ ಸ್ಥಳವನ್ನು ಬದಲಾಯಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಗಣೇಶನ ಪೂಜೆ ಮತ್ತು ಉಪವಾಸದಲ್ಲಿ, ಮನಸ್ಸು, ಕಾರ್ಯ ಮತ್ತು ಮಾತಿನಲ್ಲಿ ಶುದ್ಧರಾಗಿರಿ ಮತ್ತು ಬ್ರಹ್ಮಚರ್ಯದ ನಿಯಮಗಳನ್ನು ಅನುಸರಿಸಿ.


4. ಸಂಕಷ್ಟ ಚತುರ್ಥಿ ಮಂತ್ರ:


- ಗಣೇಶನನ್ನು ಸ್ತುತಿಸುವ ಮಂತ್ರ:


''ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಭೂಫಲಚಾರು ಭಕ್ಷನಂ|

ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರಪಾದಪಂಕಜಂ||''


ಶ್ರೀ ಗಣೇಶ ಗಾಯತ್ರಿ ಮಂತ್ರ:


''ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ಬುದ್ಧಿದ್‌ ಪ್ರಚೋದಯಾತ್''


ಸಂಪತ್ತು ಪಡೆಯಲು ಮಂತ್ರ:


''ಓಂ ನಮೋ ಗಣಪತಯೇ ಕುಬೇರ ಯೇಕದ್ರಿಕೋ ಫಟ್ ಸ್ವಾಹಾ''


5. ಗಣೇಶನ 12 ನಾಮಾವಳಿಗಳು:


ಪದ್ಮ ಪುರಾಣದ ಪ್ರಕಾರ ಗಣೇಶನ 12 ಹೆಸರು


- ಗಣಪತಿ

- ವಿಘ್ನರಾಜ

- ಲಂಬೋದರ

- ಗಜಾನನ

- ದ್ವೇಮಾತುರ

- ಹೇರಂಬ

- ಏಕದಂತ

- ಗಣಾಧಿಪ

- ವಿನಾಯಕ

- ಚಾರುಕರ್ಣ

- ಪಶುಪಾಲ ಮತ್ತು

- ಭವಾತ್ಮಜ.


ವರದ ಸಂಕಷ್ಟ ಚತುರ್ಥಿ ವ್ರತದ ದಿನದಂದು ಗಣೇಶನನ್ನು ಪೂಜಿಸುವುದರೊಂದಿಗೆ ಗಣೇಶ ಮಂತ್ರಗಳನ್ನು, ಗಣೇಶ ನಾಮಾವಳಿಗಳನ್ನು ಪಠಿಸುವುದರಿಂದ ನಾವು ಬೇಡಿದ ವರವನ್ನು ಪಡೆದುಕೊಳ್ಳಬಹುದು.

Ads on article

Advertise in articles 1

advertising articles 2

Advertise under the article